ಅಂಗಳದ ಕುಂಡದಲಿ ಅರಳಿರುವ ಪುಷ್ಪಗಳ
ಅಂದವನು ಕಂಗಳೊಳು ಸಂತಸದಿ ಸವಿದಿರಲು
ನೊಂದಮನಕೊಂದಿನಿತು ತಂಗಾಳಿ ತೀಡಿದಂತೆ!
ಮಂದವಾದುವು ನೋವು ಬೆಂದ ಹೃದಯದೊಳಗೆ,
ಇಂದೆನಗೆ ಸುಖವು ಅಂದು ಒಲವಿನಲಿ ನೀರೆರೆದುದಕೆ
ಬಂದು ನಿಂತಿರಿ ಎನ್ನ ಅಂಗಳದಿ ನಲಿವ ತಂದೆನಗೆ!
ನಂಬುವೆನು ನಿಮ್ಮೆಸಳ, ಘಮ್ಮೆನುವ ಪರಿಮಳಕೆ
ಕುಂದುಬರದಿರಲೆಂಬುದೆನ್ನಯ ಹಂಬಲವು ಎಂದೂ...
====