ಶನಿವಾರ, ಆಗಸ್ಟ್ 6, 2011

ಕವಿ ನಾನು

ಕೆಸರಲಿ ಕದಡಿದ ಬಳ್ಳಿಗೆ
ಬಿಳಿಯ ಹೂವ ಬಿಡುವ ತವಕ
ತನ್ನುಸಿರ ಪಣವಿಟ್ಟು,

ಮುಳ್ಳು ತುಂಬಿದ ಗಿಡಕೆ
ಸಿಹಿ ಹಣ್ಣ ಕೊಡುವ ಹಂಬಲ
ನೋವ ತನ್ನೊಳಗಿಟ್ಟು

ಕರಿಮೋಡವಾದರೂ ನಿಡು
ಸುಯ್ಯುವಾಸೆ ಎಡೆಬಿಡದೆ
ಸೋನೆಯ ಸುವಾಸನೆ

ನೂರು ಕನಸುಗಳ ಕಂಡು
ಕವಿಯಾದೆ ನಾನಿಂದು
ಕನ್ನಡದ ಮಗನಾಗಿ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ