ಗುರುವಾರ, ಸೆಪ್ಟೆಂಬರ್ 22, 2011

ಸಾಂತ್ವನ

ಕಡು ಬೇಸಗೆಯ ಧೂಳ ರಾಶಿ
ನೆತ್ತಿ ಮೇಲೆ ಸುಡುವ ಸೂರ್ಯ
ಕೆಂಪಡರಿದ ಹುಲ್ಲ ಕುಡಿ ಅಲ್ಲಲ್ಲಿ

ಉದುರಿದರೂ ನೀಲ ಬಾನ
ಬಿಳಿಮೋಡದ ಒಂದೆರಡು
ಸಾಂತ್ವನದ ಹನಿಗಳ ತೊಟ್ಟು,
ಹಸಿರಾಗಲಿಲ್ಲ ಆ ಹುಲ್ಲ ಕುಡಿ
ಧೂಳಿನಲೆ ಮತ್ತೆ ಕೆಂಪಾಗಿ
ಬೆಂದಿತ್ತು ಕಡು ಉರಿಯೊಳಗೆ

ಉರಿವ ಸೂರ್ಯನೂ ಮೌನಿ
ಧೂಳ ಕಣಗಳು ನಕ್ಕಿದ್ದವೂ,
ಬಳಲಿಕೆಯೊಂದೇ ಬತ್ತಳಿಕೆಯೊಳಗೆ
ಹುಲ್ಲ ಕುಡಿ ಮುದುಡಿ ಎರಗಿದ್ದು
ಇಂದಲ್ಲ ನಾಳೆ ಹಸಿರ ತಂಪನೀವ
ಭೂತಾಯೀ ಮಡಿಲೊಳಗೆ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ