ಶನಿವಾರ, ಸೆಪ್ಟೆಂಬರ್ 17, 2011

ಬದುಕು ಅಡುಗೆ ಮನೆ

ಕಣ್ಣ ಹನಿ ರೆಪ್ಪೆಯಿಂದಿಳಿದು ಕೆನ್ನೆಗೆ
ಈರುಳ್ಳಿಯ ಘಾಟು ಘಮಕೂ,
ಸಾಸಿವೆ ಕಾಳು, ಜೀರಿಗೆಯ ನಗು
ಕುದಿವ ಎಣ್ಣೆಯಲೂ ಚಟ ಪಟ
ಹಿತವಾಗಿದೆ ಒಗ್ಗರಣೆಯ ರುಚಿ,
ಮುದವ ನೀಡಿದ್ದು, ಅರೆ ಬೆಂದರೂ
ತರಕಾರಿಯ ತಂಪು ಮನಸು
ಬೆಂಕಿ ನಾಲಗೆಯ ಮೇಲೆ ಬೆಂದು
ಕೊತ ಕೊತ ಕುದಿವ ನೀರ ಹಬೆಯಲ್ಲೂ
ಅನ್ನ ಶುಭ್ರ ನಗೆಯ ಬೀರಿ ಕೆಂಪಗಾಗದೆ
ಬಿಳಿಯ ಹೂವಾಗಿತ್ತು....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ